Monday, April 21, 2008

ಯಾನದ ಪ್ರಾರಂಭದಲ್ಲಿ ನಾಲ್ಕು ಮಾತುಗಳು

ನಾನು ಬ್ಲಾಗ್ ಲೋಕಕ್ಕೆ ಕಾಲಿಟ್ಟು ಇನ್ನೂ ತಿಂಗಳಷ್ಟೇ ಆಯಿತು. ಇಲ್ಲಿನ ಆಗಾಧತೆಯನ್ನು ಕಂಡು ಬೆಚ್ಚಿದ್ದೇನೆ ಹಾಗು ಕನ್ನಡದಲ್ಲಿ ಇಷ್ಟೊಂದು ಒಳ್ಳೆಯ ಬರವಣಿಗೆಗಳನ್ನು ಓದಲು ಸಿಕ್ಕಿದ್ದಕ್ಕೆ ಸಂತಸಗೊಂಡಿದ್ದೇನೆ. ನಾನು ಬರೆಯಲು ಪ್ರಾರಂಭಿಸಿದ್ದು ಇತ್ತೀಚೆಗೆ. ನನಗೆ ಬರೆಯಲು ಪ್ರೇರಣೆ ನೀಡಿದ್ದು ಶಿವುರವರ "ಹರಟೆ"ಗಳು. ಶಿವುರವರ ಪ್ರೇರೇಪಣೆ, ಅಮ್ಮ ಮತ್ತು ಜಯಂತ್ ಸರ್ ಅವರ ಪ್ರೋತ್ಸಾಹ ನಾನು ನಾಲ್ಕು ಅಕ್ಷರಗಳನ್ನು ಗೀಚಲು ಸಾಧ್ಯವಾಗಿಸಿದವು. ನನ್ನ ದಿನಚರಿಗಷ್ಟೆ ಸೀಮಿತವಾಗಿದ್ದ ನನ್ನ ಬರಹಗಳು ಈಗ ಬ್ಲಾಗ್ ಲೋಕದ ಕಟ್ಟೆ ಹತ್ತಿವೆ. ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಆಸಕ್ತಿ ಹೊಂದಿರುವ ನಾನು ಈವರೆಗೆ ಓದಿದ್ದು ಅತ್ಯಲ್ಪ. ಇನ್ನೂ ಓದಬೇಕು. ಕವನಗಳನ್ನು ಬರೆಯಲು ಪ್ರಯತ್ನಿಸಿದ್ದೆನಾದರೂ, ಬರೆದ ಕವನಗಳೆಲ್ಲ ತೀರಾ ಬಾಲಿಶವೆನಿಸಿ ಅದನ್ನು ಅಲ್ಲಿಗೆ ಕೈ ಬಿಟ್ಟಿದ್ದೇನೆ. ನನ್ನ ಬರಹಗಳನ್ನು ಓದಿ ಅದರ ಬಗೆಗಿನ ನಿಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ತಿಳಿಸಿದರೆ ನನ್ನನ್ನು ನಾನು ತಿದ್ದಿಕೊಂಡು ಇನ್ನೂ ಉತ್ತಮವಾಗಿ ಬರೆಯಲು ಸಾಧ್ಯವಾಗುತ್ತದೆ. ಚರ್ಚೆಗೆ ಮುಕ್ತ ಅವಕಾಶವಿದೆ.

No comments: