ಪರೀಕ್ಷೆ ಸಮಯದಲ್ಲಿ ಬರವಣಿಗೆ ಹಾಗು ಚಿತ್ರಕಲೆ ಮೇಲೆ ಅತೀವ ಆಸಕ್ತಿ ಹುಟ್ಟಿ, ಪರೀಕ್ಷೆ ಇದೆ ಅನ್ನೊ ನೆಪ ಇಟ್ಟುಕೊಂಡು, ಪರೀಕ್ಷೆ ಮುಗಿದ ಮೇಲೆ ದಿನಕ್ಕೊಂದು ಲೇಖನ ಬರೆದರಾಯಿತು, ದಿನ ಒಂದೊಂದು ಚಿತ್ರ ಬಿಡಿಸಿದರಾಯಿತು ಅಂದುಕೊಂಡು ಆಸೆಯನ್ನು ಹತ್ತಿಕ್ಕಲೂ ಆಗದೆ, ಓದಲೂ ಆಗದೆ ಇರುವ ಒಂದು ವಿಚಿತ್ರ ಸ್ಥಿತಿಯಲ್ಲಿ ಪರೀಕ್ಷೆಯನ್ನು ಮುಗಿಸುತ್ತೇನೆ. ಪರೀಕ್ಷೆ ಮುಗಿದ ಮರುದಿನದಿಂದ ನನಗೂ ನನ್ನ ಬ್ಲಾಗ್ ಗೂ ಯಾವುದೇ ಸಂಭಂದ ಇಲ್ಲ ಎನ್ನುವ ಭಾವನೆ ಶುರು ಆಗುತ್ತೆ. ಬರೆಯೋಕೆ ವಿಷಯಗಳಿಲ್ಲ ಎಂದಲ್ಲ. ಈ ರೀತಿ ಯಾಕಾಗುತ್ತೊ ಗೊತ್ತಿಲ್ಲ. ಪ್ರತೀ ರಜೆಯೊ ಹೀಗೆ ಕಳೆದು ಹೋಗೊದನ್ನ ಮೊಕ ಪ್ರೇಕ್ಷಕನಾಗಿ ನೋಡೊ ಹಿಂಸೆ ಸಾಕಾಗಿ ಹೋಗಿದೆ. ಇದರಿಂದ ಹೊರ ಬರುವ ಸಲುವಾಗಿ ಈ ಚಿತ್ರವನ್ನು ಬಿಡಿಸಿದ್ದೇನೆ. ಇದೊಂದು ಅಪೂರ್ಣ ಚಿತ್ರ. ಮುಂದುವರೆಸುವ ಮನಸ್ಸಿಲ್ಲದೆ ಹೊಸ ಪ್ರಯೋಗವೆಂಬ ಹಣೆಪಟ್ಟಿ ಕಟ್ಟಿ ಪೋಸ್ಟ್ ಮಾಡುತ್ತ ಇದ್ದೇನೆ.
Tuesday, July 22, 2008
Saturday, July 12, 2008
ನನಗೂ ನಿನಗೂ ಕಣ್ಣಲ್ಲೇ ಪರಿಚಯ
ನನಗೆ ಇತ್ತೀಚೆಗೆ ತುಂಬಾ ಇಷ್ಟ ಆದ ಹಾಡು ಇದು, ಅರಮನೆ ಚಿತ್ರದ ಈ ಹಾಡನ್ನು ಜಯಂತ್ ಕಾಯ್ಕಿಣಿ ಅವರು ರಚಿಸಿದ್ದಾರೆ. ಕುನಾಲ್ ಗಾಂಜವಾಲರ ಧ್ವನಿಯಲ್ಲಿನ ಈ ಹಾಡಿಗೆ ಗುರುಕಿರಣ್ ಅವರು ಸಂಗೀತ ನೀಡಿದ್ದಾರೆ.
ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ
ನಲುಮೆ ಸ್ನೇಹದ ನವಿರಾದ ಗ್ರಂಥವೆ
ಪುಟವಾ ತೆರೆಯುವಾ ಹಿತವಾದ ಗಂಧವೆ
ಮೊದಲಾ ನುಡಿಯಲೀ ನಾನೀಗ ತನ್ಮಯ
ಇನ್ನೂ ಕಥೆಯಲಿ ನೀನನ್ನಾ ಕರೆದೆಯಾ
ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ
ಮೊದಲಾ ಸ್ಪರ್ಶಕೆ ಇನ್ನೆಲ್ಲಿ ಹೋಲಿಕೆ
ಮೃದುಲಾ ಭಾವದೀ ನನ್ನೊಂದು ಕೋರಿಕೆ
ಎಲ್ಲಾ ತಿಳಿದರೂ ಯಾಕಿನ್ನೂ ಅಭಿನಯ
ವಿರಹಾ ಬಂದಿದೆ ಒಲವಿನ್ನೂ ನಿಶ್ಚಯ
ನನಗೂ ನಿನಗೂ ಕಣ್ಣಲ್ಲೇ ಪರಿಚಯ
ಸನಿಹ ಸುಳಿವ ಮನದಾಸೆ ಅತಿಶಯ
ಏನೋ ಆಗಿದೆ ನನಗಂತೂ ಸಂಶಯ
Thursday, July 3, 2008
Subscribe to:
Posts (Atom)